ಶತಶತಮಾನಗಳಿಂದಲೂ ನೋವು, ಅವಮಾನವನ್ನು ಅನುಭವಿಸಿದ ಸಮುದಾಯದ ಬದುಕನ್ನು ಕಾವ್ಯ ವಾಗಿಸಿದ, ಇತ್ತೀಚೆಗೆ ನಮ್ಮನ್ನಗಲಿದ, ಬಂಡಾಯದ ಕವಿ ಎಂದೇ ಪ್ರಸಿದ್ಧರಾದ ಡಾ. ಸಿದ್ಧಲಿಂಗಯ್ಯ ಅವರ ಕವಿತೆಯ ಈ ಸಾಲುಗಳು ನೆನಪಾದವು... ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಕಪ್ಪುಮುಖ ಬೆಳ್ಳಿ ಗಡ್ಡ ಉರಿಯುತಿರುವ ಕಣ್ಣುಗಳು, ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು...’ ಓದುತ್ತಿದ್ದಂತೆ ಮಚ್ಚಳ್ಳಿ ಜನರ ಅವಸ್ಥೆಯನ್ನು ನೆನೆಸಿ ಕೊಂಡು ಕಣ್ಣುಗಳು ಒದ್ದೆಯಾದವು.