ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾ ಪಡೆ ನಿಗ್ರಹಿಸಿ

ಅಕ್ಷರ ಗಾತ್ರ

ಬೆಂಗಳೂರಿನ ಕೋಣನಕುಂಟೆಯ ಶ್ರೀನಿಧಿ ಬಡಾವಣೆ, ಚುಂಚಘಟ್ಟದ ಕಡೆ ಕೆಲವು ರೌಡಿಗಳು 70ರ ದಶಕದಲ್ಲಿ ತೋರುತ್ತಿದ್ದ ರೀತಿಯಲ್ಲಿ ಅಟ್ಟಹಾಸ ತೋರುತ್ತಿದ್ದಾರೆ. ನಾಗರಿಕರ ಮೇಲೆ ದೌರ್ಜನ್ಯ, ದೈಹಿಕ ಬಲ ಪ್ರಯೋಗಿಸಿದ ನಿದರ್ಶನಗಳಿವೆ. ಇವರಿಗೆ ಕೆಲವು ಗೂಂಡಾ ರಾಜಕಾರಣಿಗಳ ರಕ್ಷಣೆ ಇದೆ. ರಾಜಕಾರಣಿಗಳು ಹಾಗೂ ರೌಡಿಗಳ ಕಾನೂನುಬಾಹಿರ ಕೃತ್ಯಕ್ಕೆ ನೆರವಾಗುತ್ತಿರುವ ಕೆಲ ವ್ಯಕ್ತಿಗಳು ಈ ಬಡಾವಣೆಯ ಕ್ಷೇಮಾಭಿವೃದ್ಧಿಗೆ ಭಂಗವನ್ನುಂಟು ಮಾಡುತ್ತಿದ್ದಾರೆ.

ಈ ಬಗ್ಗೆ ಈಗಾಗಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದೇವೆ. ಕೆಲವು ಪೊಲೀಸರು ಸಹ ಇವರ ಬೆನ್ನಿಗಿದ್ದಾರೆ. ಹೀಗಾಗಿ, ಇಲ್ಲಿನ ರೌಡಿಗಳ ಅಡ್ಡಾವನ್ನು ಖಾಲಿ ಮಾಡಿಸಲು ಪೊಲೀಸ್ ಕಮಿಷನರ್‌ ಅವರು ಸೂಕ್ತ ಕ್ರಮ ಕೈಗೊಂಡು, ನಾಗರಿಕರು ಕ್ಷೇಮವಾಗಿ ಬದುಕಲು ಅವಕಾಶ ಮಾಡಿಕೊಡಬೇಕು.

- ಡಾ. ಗೋವಿಂದಸ್ವಾಮಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT