ಬೆಂಗಳೂರಿನ ಕೋಣನಕುಂಟೆಯ ಶ್ರೀನಿಧಿ ಬಡಾವಣೆ, ಚುಂಚಘಟ್ಟದ ಕಡೆ ಕೆಲವು ರೌಡಿಗಳು 70ರ ದಶಕದಲ್ಲಿ ತೋರುತ್ತಿದ್ದ ರೀತಿಯಲ್ಲಿ ಅಟ್ಟಹಾಸ ತೋರುತ್ತಿದ್ದಾರೆ. ನಾಗರಿಕರ ಮೇಲೆ ದೌರ್ಜನ್ಯ, ದೈಹಿಕ ಬಲ ಪ್ರಯೋಗಿಸಿದ ನಿದರ್ಶನಗಳಿವೆ. ಇವರಿಗೆ ಕೆಲವು ಗೂಂಡಾ ರಾಜಕಾರಣಿಗಳ ರಕ್ಷಣೆ ಇದೆ. ರಾಜಕಾರಣಿಗಳು ಹಾಗೂ ರೌಡಿಗಳ ಕಾನೂನುಬಾಹಿರ ಕೃತ್ಯಕ್ಕೆ ನೆರವಾಗುತ್ತಿರುವ ಕೆಲ ವ್ಯಕ್ತಿಗಳು ಈ ಬಡಾವಣೆಯ ಕ್ಷೇಮಾಭಿವೃದ್ಧಿಗೆ ಭಂಗವನ್ನುಂಟು ಮಾಡುತ್ತಿದ್ದಾರೆ.