ವಿಶ್ವವಿದ್ಯಾಲಯದ ಆಡಳಿತವು ಪ್ರತಿಮೆಗಳನ್ನು ಸ್ಥಾಪಿಸಲು ಯಾವುದೇ ನಿಯಮಾವಳಿ ರೂಪಿಸಿದರೂ ಇದು ಸುಲಭದಲ್ಲಿ ಬಗೆಹರಿಯುವ ಸಮಸ್ಯೆಯಲ್ಲ. ಏಕೆಂದರೆ, ಭಾರತದಲ್ಲಿ ದೇವದೇವತೆಯರು, ಮಹಾತ್ಮರ ಸಂಖ್ಯೆಯು ಜನಸಾಮಾನ್ಯರ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಅತ್ಯುತ್ತಮ ಪರಿಹಾರವೆಂದರೆ, ಪಾಷ ಅವರು ಪ್ರತಿಪಾದಿಸಿರುವಂತೆ, ನಮ್ಮ ಸಂವಿಧಾನದ ಪ್ರಸ್ತಾವನೆಯ ಶಿಲಾಸಂಕೇತವನ್ನು ಸ್ಥಾಪಿಸುವುದು ಜಾಣತನ. ವಿಶ್ವವಿದ್ಯಾಲಯ ಮತ್ತು ಸಂಘ ಸಂಸ್ಥೆಗಳು ಇಂಥ ಪ್ರಬುದ್ಧತೆಯನ್ನು ತೋರಲಿ.