‘ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಜಾಣ್ಮೆ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಶಿವಮೂರ್ತಿ ಮುರುಘಾ ಶರಣರು ಬಿಜೆಪಿಯ ಹೈಕಮಾಂಡನ್ನು ಕೊಂಡಾಡಿದ್ದಾರೆ (ಪ್ರ.ವಾ., ಜುಲೈ 29). ಬಿಜೆಪಿಯ ಹೈಕಮಾಂಡಿನ ಜಾಣ್ಮೆ ಮತ್ತು ಪ್ರಬುದ್ಧತೆಯನ್ನು ಕೊಂಡಾಡುವಂಥದ್ದೇನಿದೆ ಇಲ್ಲಿ ಎಂಬುದು ಅರ್ಥವಾಗುತ್ತಿಲ್ಲ. ಬದಲಿಗೆ ‘ಮೂಗು ಹಿಡಿದರೆ ಬಾಯಿ ತೆರೆಯಲೇ ಬೇಕಾಗುತ್ತದೆ’ ಎಂಬ ಲೋಕಾರೂಢಿಯ ಮಾತು ಹಾಗೂ ಸರಳ ಸತ್ಯವನ್ನು ಅರಿತು ಅದರಂತೆ ಬಿಜೆಪಿ ಹೈಕಮಾಂಡ್ ನಡೆದುಕೊಳ್ಳಲೇ ಬೇಕಾದಂಥ ಅನಿವಾರ್ಯವನ್ನು ಉಂಟುಮಾಡಿದ ಸಕಲ ಮಠಾಧೀಶರ ಜಾಣ್ಮೆ ಮತ್ತು ಬಲ್ಮೆಯನ್ನು ಎಷ್ಟು ಕೊಂಡಾಡಿದರೂ ಸಾಲದು!