ಇನ್ನು ‘ಥಾಟ್ಸ್ ಆನ್ ಪಾಕಿಸ್ತಾನ್’ ಕೃತಿಯಲ್ಲಿ ಮುಸ್ಲಿಂ ದಾಳಿಗಳನ್ನು ಅಂಬೇಡ್ಕರ್ ನಿಷ್ಪಕ್ಷಪಾತವಾಗಿ ಖಂಡಿಸಿದ್ದಾರೆ ನಿಜ. ಆದರೆ ಅದೇ ಕೃತಿಯಲ್ಲಿ, ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಅವರನ್ನು ಅಷ್ಟೇ ನಿಷ್ಪಕ್ಷಪಾತವಾಗಿ ಅವರು ಟೀಕಿಸಿದ್ದಾರೆ. ಆಶ್ಚರ್ಯವೆಂದರೆ, ಲೇಖಕರು ಈ ಅಂಶವನ್ನು ಪ್ರಸ್ತಾಪಿಸಲು ಹೋಗುವುದಿಲ್ಲ. ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳ ದೌರ್ಜನ್ಯಗಳನ್ನು, ದಾಳಿಗಳನ್ನು, ದಬ್ಬಾಳಿಕೆಗಳನ್ನು ತಮ್ಮೆಲ್ಲಾ ಬರಹಗಳಲ್ಲಿ ನಿಷ್ಪಕ್ಷಪಾತವಾಗಿ ದಾಖಲಿಸಿರುವ ಅಂಬೇಡ್ಕರರ ಚಿಂತನೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಂಬಿಸಿದರೆ, ಅದು ಹಾಡಹಗಲಲ್ಲೇ ಅಂಬೇಡ್ಕರ್ ಚಿಂತನೆಗಳ ತಿರುಚುವಿಕೆಯ ಸ್ಪಷ್ಟ
ಉದಾಹರಣೆಯಾಗುತ್ತದಷ್ಟೆ.