ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ಆಗಿದೆ. ನೂರನೇ ಸಮ್ಮೇಳನವೂ ನಡೆದೀತು. ಆದರೆ, ನಿರ್ಣಯಗಳು (ಅದೂ ಬಹಿರಂಗ ಅಧಿವೇಶನದಲ್ಲಿ ಚರ್ಚೆಯಿಲ್ಲದೆ) ಆಗಬೇಕೇ? ಆಗದಿದ್ದರೆ ಒಂದು ಕೊರತೆಯೇ? ಪರಿಷತ್ತು ಮತ್ತು ಅದರ ಘಟಕಗಳು ಸಮ್ಮೇಳನ ನಡೆಸಲು ಸರ್ಕಾರದ ಬಜೆಟ್ ವ್ಯಯಿಸಲು ವಾಹಕಗಳಷ್ಟೆ, ಅನುಷ್ಠಾನಕ್ಕೆ ಒತ್ತಾಯಿಸಲು ಏನು ಮಾಡಬಲ್ಲವು? ಹಾಗೆಯೇ ಚಲನಚಿತ್ರ ಅಕಾಡೆಮಿಯೂ.