ದೇವರಕಾಡುಗಳೆಂದು ಕರೆಯಲಾಗುವ ಮರಗಳ ಗುಂಪನ್ನು ಹಿಂದೆ ಯಾವುದೇ ರೀತಿಯಿಂದಲೂ ಅಡ್ಡಿಪಡಿಸದೇ ಕಾಪಾಡುತ್ತಿದ್ದರು. ಇಲ್ಲಿ ಹಲವು ಬಗೆಯ ಹಣ್ಣಿನ ಮರಗಳು, ಗಿಡಮೂಲಿಕೆಗಳು, ಬಗೆ ಬಗೆಯ ಹೂವಿನ ಮರಗಳನ್ನು ಬೆಳೆಸುತ್ತಿದ್ದರು. ಇದರ ಉದ್ದೇಶ ಪಕ್ಷಿಗಳಿಗೆ ಆಶ್ರಯ, ಹೂಗಳಿಂದ ಜೇನಿನ ಪರಾಗಸ್ಪರ್ಶ, ಉತ್ತಮ ಗಾಳಿ. ಇದು ಪರಿಸರ ಸಮತೋಲನ ಕಾಪಾಡುವ ವೈಜ್ಞಾನಿಕ ವಿಧಾನವಾಗಿತ್ತು. ಮನುಷ್ಯನ ಸ್ವಾರ್ಥ, ದುರಾಸೆಯಿಂದಾಗಿ ಇಂದು ಎಲ್ಲವೂ ನಾಶದ ಸ್ಥಿತಿಗೆ ತಲುಪಿವೆ. ಇನ್ನಾದರೂ ಗಿಡ, ಮರ, ಪ್ರಾಣಿ, ಪಕ್ಷಿ, ಕಾಡು, ಬೆಟ್ಟ ಇವುಗಳೊಂದಿಗೆ ಬದುಕು ಕಟ್ಟಿಕೊಳ್ಳೋಣ. ಅವುಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ ಎಂಬ ಸತ್ಯವನ್ನು ಅರಿಯೋಣ.