ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ನೆರವಾದ ಮಹಾನುಭಾವ

Last Updated 31 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಪಿ.ಎಂ.ಬಾಂಗಿಯವರ ಜನಪರ ಕಾಳಜಿ ಕುರಿತಾದ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ ‘ಸರಳ ನಡೆಯ ಸೊಬಗು’ (ಸಂಗತ, ಆ. 30) ಓದಿದ ನನಗೆ, ಬಾಂಗಿಯವರ ಕಾರ್ಯವೊಂದು ನೆನಪಿಗೆ ಬಂತು. ಬಾಂಗಿಯವರು 1972ರಲ್ಲಿ ಜಮಖಂಡಿ ಭಾಗದ ಶಾಸಕರಾಗಿದ್ದರು. ಆಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಆ ವರ್ಷ ಈ ಪ್ರದೇಶ ಭೀಕರ ಬರಗಾಲಕ್ಕೆ ತುತ್ತಾಯಿತು. ಸಾಮಾನ್ಯವಾಗಿ ಬನಹಟ್ಟಿ, ರಬಕವಿ, ಹೊಸೂರ, ಚಿಮ್ಮಡ, ಜಗದಾಳ ಮತ್ತು ನಾವಲಗಿ ಊರುಗಳಲ್ಲಿನ ಬಾವಿಗಳೆಲ್ಲ ಡಿಸೆಂಬರ್‌ ತಿಂಗಳಲ್ಲೇ ಬತ್ತಿ ಹೋಗಿರುತ್ತಿದ್ದವು. ರೈತರ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಇದನ್ನು ಮನಗಂಡಿದ್ದ ಬಾಂಗಿಯವರು ಈ ಊರುಗಳ ಮಧ್ಯದಲ್ಲಿ ಕೆರೆ ನಿರ್ಮಾಣಕ್ಕೆ ಒಂದು ಪ್ರಶಸ್ತವಾದ ಸ್ಥಳ ಗುರುತಿಸಿ, ಮುಖ್ಯಮಂತ್ರಿಯವರ ಒಪ್ಪಿಗೆ ಪಡೆದುಕೊಂಡು ಕಾರ್ಯೋನ್ಮುಖರಾದರು.

ಕೆರೆ ನಿರ್ಮಾಣದ ಜವಾಬ್ದಾರಿಯನ್ನು ನಿರುದ್ಯೋಗಿ ತರುಣ ಎಂಜಿನಿಯರ್‌ ಒಬ್ಬರಿಗೆ ವಹಿಸಿಕೊಟ್ಟರು. ಕೆಲಸ ಪ್ರಾಮಾಣಿಕ ರೀತಿಯಲ್ಲಿ ನಡೆದು ₹ 6 ಲಕ್ಷ ವೆಚ್ಚದಲ್ಲಿ, ವರ್ಷೊಪ್ಪತ್ತಿನಲ್ಲಿ ಕೆರೆ ನಿರ್ಮಾಣಗೊಂಡಿತು. ಮುಂಬರುವ ದಿನಗಳಲ್ಲಿ ಸುಮಾರು ನಾಲ್ಕುನೂರ ಬಾವಿಗಳಲ್ಲಿ ಮೇ ಮಾಸದವರೆಗೂ ನೀರು ತುಂಬಿಕೊಂಡಿರಲಾರಂಭಿಸಿತು. ಇದರಿಂದಾಗಿ ಸಾವಿರಾರು ರೈತರು ಇಂದಿಗೂ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಈ ಕೃತಜ್ಞ ಕೃಷಿಕರು ಈ ಕೆರೆಗೆ ‘ಪಿ.ಎಂ.ಬಾಂಗಿ ಸರೋವರ’ ಎಂದು ನಾಮಕರಣ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

-ಜಯವಂತ ಕಾಡದೇವರ, ಬನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT