ಸರ್ಕಾರ ಈಗ ಎದುರಿಸುತ್ತಿರುವ ತೀವ್ರ ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ‘ಕೊರೊನಾ ಬಾಂಡ್’ ಅನ್ನು ಹೊರತರಲಿ. ಪ್ರತೀ ಬಾಂಡ್ನ ಮೌಲ್ಯ ಕನಿಷ್ಠ ₹1,000 ಇರುವಂತೆ ಮಾಡಲಿ. ಬ್ಯಾಂಕುಗಳಲ್ಲಿ ಠೇವಣಿಗಳಿಗೆ ಅತಿ ಕಡಿಮೆ ಬಡ್ಡಿ ದರ ನೀಡುತ್ತಿರುವ ಈ ದಿನಗಳಲ್ಲಿ, ಅದಕ್ಕಿಂತ ತುಸು ಹೆಚ್ಚಿನ ಬಡ್ಡಿ ನೀಡಿದರೆ ಸಾರ್ವಜನಿಕರು ಇಲ್ಲಿ ಹೂಡಿಕೆ ಮಾಡುತ್ತಾರೆ. ಸರ್ಕಾರದ ಖಾತರಿ ಇರುವುದರಿಂದ ಮತ್ತು ಕೊರೊನಾ ಪರಿಹಾರಕ್ಕೆ ಪರೋಕ್ಷ ಸೇವೆ ಸಲ್ಲಿಸಿದಂತೆ ಆಗುವುದರಿಂದ ಜನ ಈ ಬಾಂಡ್ಗಳನ್ನು ಖರೀದಿಸುತ್ತಾರೆ. ಹಣಕಾಸು ಪರಿಸ್ಥಿತಿ ಸುಧಾರಿಸಿದ ನಂತರ ಜನರಿಗೆ ಹಣ ಹಿಂದಿರುಗಿಸಬಹುದು.