ಕೋವಿಡ್– 19 ಲಸಿಕೆ ಪಡೆದವರಿಗೆ ಲಸಿಕೆಯಿಂದ ಅಡ್ಡಪರಿಣಾಮ ಅಥವಾ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ವಿಮಾ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಫೆ. 9). ಲಸಿಕೆ ಕಂಡುಹಿಡಿದ ಮೇಲೆ ಅದರ ಸಾಧಕ ಬಾಧಕಗಳನ್ನು ಒರೆಗೆಹಚ್ಚಿ, ಅದರಿಂದ ಮನುಜರಿಗೆ ಯಾವುದೇ ಅಪಾಯ ಇಲ್ಲ ಎಂದು ಮನವರಿಕೆಯಾದ ಮೇಲೆ ಮಾತ್ರ ಅದನ್ನು ಪ್ರಯೋಗಿಸಲು ಅನುಮತಿ ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ.