ಬಾಣಂತಿಯರು 21 ದಿನ ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಮೂರು ದಿನ ಹಟ್ಟಿಯಿಂದ ಹೊರಗಿಡುವ ಅವರ ಆಚರಣೆ ಇನ್ನೂ ಜೀವಂತವಾಗಿರುವುದಕ್ಕೆ ಕಾರಣ ನಮ್ಮ ಸರ್ಕಾರ. ಸರ್ಕಾರವೇ ಇದನ್ನು ಪ್ರೋತ್ಸಾಹಿಸಿ ‘ಕೃಷ್ಣಕುಟೀರ’ ಎಂದು ನಿರ್ಮಿಸಿ, ಇಂಥ ಮೌಢ್ಯಾಚರಣೆಯನ್ನು ಉತ್ತೇಜಿಸಿತು. ಹೀಗಾದರೆ ಇನ್ನು ಇವರನ್ನು ಮೌಢ್ಯದಿಂದ ಹೊರ ತರುವುದಾದರೂ ಯಾರು? ಬುಡಕಟ್ಟು ಕಾಡುಗೊಲ್ಲ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದಿದೆ.