‘ನನ್ನ ತಪ್ಪಿನಿಂದ ಧರ್ಮಸಿಂಗ್ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರೊ. ಶಿವರಾಮಯ್ಯ ಅವರು, ಕುಮಾರಸ್ವಾಮಿ ಅವರದ್ದು ‘ದೊಡ್ಡ ಗುಣ’ (ವಾ.ವಾ., ಆ. 1) ಎಂದಿದ್ದರು. ಇದರಲ್ಲಿ ತಪ್ಪೇನಿದೆ? ರಾಜಕಾರಣಿಗಳನ್ನು ಯಾವಾಗಲೂ ವಕ್ರವಾಗಿಯೇ ನೋಡುವುದು ಪ್ರಜಾಪ್ರಭುತ್ವಕ್ಕೆ ಅಷ್ಟೊಂದು ಆರೋಗ್ಯಕರವಲ್ಲ. ಇದಕ್ಕೆ ಪ್ರೊ. ರಘುನಾಥ್ (ವಾ.ವಾ., ಆ.2) ಅವರು ಅನ್ಯಥಾ ಭಾವಿಸಬಾರದು.