‘ಹಿರಿಯರು ತಮ್ಮದೇ ಎಲ್ಲಾನಡೆಯಬೇಕು ಎನ್ನುವ ಅಹಂ ಬಿಟ್ಟು, ಕಾಲ, ಸಂದರ್ಭಗಳಿಗೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು. ಆಗ ಸಂಸಾರದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಟಿ.ಎಸ್. ಪ್ರತಿಭಾ ಹೇಳಿದ್ದಾರೆ (ವಾ.ವಾ., ಮೇ 16). ಮನೆಯಲ್ಲಿ ಹಿರಿಯರು ಇರಬೇಕು ಮತ್ತು ಅವರ ಅನುಭವಗಳು ನಮಗೆದಾರಿದೀಪವಾಗಬೇಕು. ಎಲ್ಲವೂ ಕಿರಿಯರಿಗೇ ಗೊತ್ತು ಎಂಬುದು ಶೈಕ್ಷಣಿಕವಾಗಿ ಒಪ್ಪಬಹುದಾದರೂ ಅನುಭವದ ವಿಚಾರದಲ್ಲಿ ಅಲ್ಲ. ಕಿರಿಯರು ತಪ್ಪು ದಾರಿಯಲ್ಲಿ ಸಾಗುತ್ತಿದ್ದರೂ ಅವರನ್ನು ಎಚ್ಚರಿಸುವುದು ತಮ್ಮಂತೆ ನಡೆಯಬೇಕು ಅಂತಲ್ಲ, ಮುಂದೆ ಅನಾಹುತ ಆಗದಿರಲಿ ಅಂತ.