ರಾಜ್ಯದಲ್ಲಿ 14 ವರ್ಷದೊಳಗಿನ ಹತ್ತು ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿಯಿಂದ ಹೊರಗೆ ಉಳಿದಿರುವುದು (ಪ್ರ.ವಾ., ಜುಲೈ 7) ಆಘಾತಕಾರಿ ಸಂಗತಿ. ಯಾವುದೇ ದೇಶದ, ಜನರ ಸ್ಥಿತಿ ಅರಿಯಲು ಮೊದಲ ಮಾನದಂಡ ಶಿಕ್ಷಣ. ಆದರೆ ನಮ್ಮಲ್ಲಿ ಶಿಕ್ಷಣದ ಬಗ್ಗೆ ಇತ್ತೀಚೆಗೆ ಮತ್ತು ಕೊರೊನಾ ನಂತರದ ದಿನಮಾನಗಳಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಚಿಂತೆಗೆ ಹಚ್ಚುತ್ತಿವೆ. ಶಿಕ್ಷಣವು ವರಮಾನ ತರುವಂಥದ್ದಲ್ಲ, ಕೇವಲ ವೆಚ್ಚದ ಬಾಬತ್ತು ಎಂದೇ ನಮ್ಮ ರಾಜಕಾರಣಿಗಳು ಭಾವಿಸಿದ್ದಾರೆ. ನಾವು ಎಚ್ಚೆತ್ತುಕೊಳ್ಳಬೇಕಾದ ಜರೂರು ಇರುವುದು ಈ ವರದಿಯಿಂದ ತಿಳಿಯುತ್ತದೆ.