ಕಳೆದ ವರ್ಷ ಭಾರಿ ಮಳೆ ಬಂದಾಗ ಯಡಿಯೂರಪ್ಪ ಅವರು ತೊಂದರೆಗೆ ಒಳಗಾದ ಜನರ ನೋವನ್ನು ನೇರವಾಗಿ ಆಲಿಸಿ, ಪರಿಹಾರ ಒದಗಿಸುವ ಭರವಸೆ ನೀಡಿ ಹೋಗಿದ್ದರು. ಆದರೆ ಆ ಭರವಸೆಯನ್ನು ಇನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಮನೆಗಳು, ಜಾನುವಾರುಗಳನ್ನು ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಮಂಜೂರಾದ ಮನೆಗಳಿಗೇ ಇನ್ನೂ ಅನುದಾನ ದೊರೆತಿಲ್ಲ. ಹೀಗಿರುವಾಗ ಇಂತಹ ಭರವಸೆಯು ಭರವಸೆ ಮಾತ್ರವೇ ಆಗಿ ಉಳಿಯದೆ, ಅತಿ ಶೀಘ್ರವಾಗಿ ಮನೆಗಳನ್ನು ನಿರ್ಮಿಸುವುದಕ್ಕೆ ಪೂರಕವಾಗಿ ಅನುದಾನ ಬಿಡುಗಡೆಯಾಗಲಿ.