ಭ್ರಷ್ಟಾಚಾರದಲ್ಲಿ ಅಧ್ಯಕ್ಷ, ಸದಸ್ಯ, ಅಧಿಕಾರಿಗಳು ಈ ಎಲ್ಲರೂ ಪಾಲುದಾರರು. ಕಿಲಾಡಿಗಳು ಬಚಾವಾಗುತ್ತಾರೆ, ಕೆಲವರು ಸಿಕ್ಕಿಬೀಳುತ್ತಾರೆ. ಅಧ್ಯಕ್ಷರ ಅಧಿಕಾರಕ್ಕೆ ಕತ್ತರಿ ಹಾಕುವುದರಿಂದ ಭ್ರಷ್ಟಾಚಾರ ಕಡಿಮೆ ಆಗುವುದಿಲ್ಲ. ಅದು, ಬೇರೊಂದು ರೂಪದಲ್ಲಿ ಪ್ರತ್ಯಕ್ಷವಾಗುತ್ತದೆ. ಅದನ್ನು ನಿರ್ಮೂಲಗೊಳಿಸಲು ಇಚ್ಛಾಶಕ್ತಿ ಬೇಕು. ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ದಿಸೆಯಲ್ಲಿ ಸರ್ಕಾರ ಚಿಂತಿಸಬೇಕು. ಅದನ್ನು ಬಿಟ್ಟು, ಇರುವ ಅಧಿಕಾರವನ್ನು ಮೊಟಕುಗೊಳಿಸುವ ಷಡ್ಯಂತ್ರವನ್ನು ಒಪ್ಪಲಾಗದು.