ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂತಹ ಕಟುಕರೂ ಇದ್ದಾರೆ

Last Updated 7 ಜೂನ್ 2019, 16:49 IST
ಅಕ್ಷರ ಗಾತ್ರ

ಪೋಷಕರು ₹ 10 ಸಾವಿರ ಸಾಲ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ, ಅವರ ಎರಡೂವರೆ ವರ್ಷದ ಮಗಳನ್ನು ಯುವಕನೊಬ್ಬ ಅಪಹರಿಸಿ, ಅವಳ ಕಣ್ಣು ಕಿತ್ತು ಹಾಕಿ ಹತ್ಯೆ ಮಾಡಿರುವ ಪೈಶಾಚಿಕ ಕೃತ್ಯದ ಸುದ್ದಿ ಓದಿ (ಪ್ರ.ವಾ., ಜೂನ್‌ 7), ನಮ್ಮ ನಡುವೆ ಇಂತಹ ಕ್ರೂರಿಗಳೂ ಇದ್ದಾರೆಯೇ ಎಂದು ಆಘಾತವಾಯಿತು.

ಉತ್ತರ ಪ್ರದೇಶದ ಅಲಿಗಡದಲ್ಲಿ ನಡೆದಿರುವ ಈ ಘಟನೆ ಮನುಕುಲವೇ ತಲೆ ತಗ್ಗಿಸುವಂತಿದೆ. ಮುಗ್ಧ ಮಗುವಿನ ಪ್ರಾಣದ ಬೆಲೆ ಕೇವಲ ಹತ್ತು ಸಾವಿರ ರೂಪಾಯಿಯೇ? ಮಾನವೀಯತೆ ಕಳೆದುಕೊಂಡು ಇಂತಹ ದುಷ್ಕೃತ್ಯ ಎಸಗುವವರಿಗೆ ಉಗ್ರ ಶಿಕ್ಷೆಯಾದರೆ, ಆ ಹಸುಳೆಯ ಪೋಷಕರಿಗೆ ಕಾನೂನಿನ ಮೇಲೆ ಚೂರಾದರೂ ನಂಬಿಕೆ ಬರಬಹುದೇನೊ?

- ಮಂಜುನಾಥ್ ಟಿ.ಎಸ್.,ತರುವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT