ಹಲವು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ಕೇಂದ್ರ ಸರ್ಕಾರ ತುದಿಗಾಲ ಮೇಲೆ ನಿಂತಂತೆ ತೋರುತ್ತಿದೆ. ಅಂಚೆ ಮತ್ತು ತಂತಿ ಇಲಾಖೆಯ ‘ತಂತಿ’ಯನ್ನು ಕತ್ತರಿಸಿ ವರ್ಷಗಳೇ ಉರುಳಿದವು. ಬಿಎಸ್ಎನ್ಎಲ್ ಅವನತಿಯ ಹಾದಿಯಲ್ಲಿದೆ. ಅಂಚೆ ಇಲಾಖೆಯೂ ಅದೇ ಹಾದಿಯಲ್ಲಿ ಸಾಗುತ್ತಿದೆ. ನಾಲ್ಕು ವರ್ಷಗಳಿಂದ ನನಗೆ ಅಂಚೆ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲವೆಂದು ಅಂಚೆ ಅಧೀಕ್ಷಕರಿಗೆ ದೂರು ನೀಡಿದ್ದಾಯಿತು, ಪುನರಪಿ ಅಂಚೆ ಅಧಿಕಾರಿಗಳ ಬಳಿಗೆ ಅಲೆದಾಡಿದ್ದೇ ಬಂತು. ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ‘ಪತ್ರಗಳು ಬಂದರೆ ತಂದುಕೊಡುತ್ತೇವೆ, ಬರದಿದ್ದಲ್ಲಿ ಎಲ್ಲಿಂದ ತರುವುದು?’ ಎಂದು ಅಂಚೆಯಣ್ಣ‘ಪ್ರಾಮಾಣಿಕ’ವಾಗಿ ಪ್ರಶ್ನಿಸುತ್ತಾರೆ.