‘ಗುರು ಲಘುವಾದರೆ ಹೇಗೆ ಸ್ವಾಮಿ?’ ಎಂಬ ರವೀಂದ್ರ ಭಟ್ಟ ಅವರ ಲೇಖನಕ್ಕೆ (ಪ್ರ.ವಾ., ಡಿ. 30) ಪ್ರತಿಕ್ರಿಯೆ ಯಾಗಿ ಬರೆದ ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯ ಅವರ ಪತ್ರ (ವಾ.ವಾ., ಜ. 1) ಓದಿದೆ. ತಮ್ಮ ಪಾವಿತ್ರ್ಯವನ್ನು ಉಳಿಸಿಕೊಂಡಿರುವ ಜೋಳಿಗೆಗಳನ್ನು ಹುಡುಕಬೇಕಿದೆ ಎಂದು ಅವರು ಹೇಳಿದ್ದಾರೆ. ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀಗಳಾದ ಸಿದ್ಧೇಶ್ವರ ಸ್ವಾಮಿಗಳು ಆ ಪಾವಿತ್ರ್ಯವನ್ನು ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿಯೇ ಖುದ್ದಾಗಿ ಕೇಳಿಕೊಂಡಾಗಲೂ ನಿರಾಕರಿಸಿದಂಥ ದಿಟ್ಟ ಸ್ವಾಮಿಗಳವರು.