ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಜಿ.ನಾರಾಯಣ ಅವರು ‘ಸಾಮಾನ್ಯ ಜನರಲ್ಲಿ ಇರುವಷ್ಟು ಕನ್ನಡ ಅಭಿಮಾನ, ಉನ್ನತ ಪದವಿಯಲ್ಲಿರುವ ಕನ್ನಡಿಗರಲ್ಲಿಲ್ಲ’ ಎಂದು ಐವತ್ತು ವರ್ಷಗಳ ಹಿಂದೆಯೇ ಹೇಳಿದ್ದರು (ಪ್ರ.ವಾ., 50 ವರ್ಷಗಳ ಹಿಂದೆ, ಅ. 9). ಇದು ಇಂದಿಗೂ ಅನ್ವಯಿಸುವ ಮಾತು. ಅಷ್ಟು ವರ್ಷಗಳ ಹಿಂದೆಯೇ ಕನ್ನಡದ ಸ್ಥಿತಿ ಹಾಗಿತ್ತೆಂದರೆ, ಇಂದು ಹೇಗಿದೆ ಎಂದು ಯೋಚಿಸಬೇಕಾಗಿದೆ.