‘ಈ ಭೂಮಿಯು ನೀರಿನ ಮೇಲೆ ತೇಲುತ್ತಿದೆ’ ಎಂಬುದು ನಿಜವಾದರೆ, ಪ್ರಕೃತಿಯು ಸಮತೋಲನ ಕಾಪಾಡಲು ಒಂದು ಕಡೆ ಗುಡ್ಡ, ಭಾರವಾದ ಖನಿಜ ಸಂಪತ್ತು ಮತ್ತು ಮರಗಳನ್ನು, ಮತ್ತೊಂದು ಕಡೆ ನೀರನ್ನು, ಇನ್ನೊಂದು ಕಡೆ ಮರಳು... ಹೀಗೆ ಕೆಲವು ಕೊಡುಗೆಗಳನ್ನು ಕೊಟ್ಟಿದೆ. ಆದರೆ ಮನುಷ್ಯನು ಆಸೆಗೆ ಕಡಿವಾಣ ಹಾಕದೆ, ಒಂದು ಕಡೆ ಭಾರ ಹೆಚ್ಚಾಗಿಸುವುದು, ಮತ್ತೊಂದು ಕಡೆ ಕಡಿಮೆ ಮಾಡುವುದು ನಡೆದಿದೆ. ಇದರಿಂದ ಎಂದಾದರೂ ಒಂದು ದಿನ ಅಪಾಯ ತಪ್ಪಿದ್ದಲ್ಲ. ಪರಿಸರ ವಾದಿಗಳು, ತಜ್ಞರು ಈ ಕುರಿತ ಅಪಾಯಗಳನ್ನು ಅಂದಾಜಿಸಿ ಜನರಲ್ಲಿ ಎಚ್ಚರಿಕೆ ಮೂಡಿಸುವುದು ಅಗತ್ಯ.