ಕರ್ನಾಟಕ ಲೋಕಸೇವಾ ಆಯೋಗವು ಅಕ್ರಮಗಳಿಗೆ ಅವಕಾಶ ನೀಡಿ ಭ್ರಷ್ಟಾಚಾರ ಎಸಗುತ್ತಿರುವ ಕುರಿತ ವರದಿ ಓದಿ (ಪ್ರ.ವಾ., ಜೂನ್ 20) ಬೆರಗಾದೆ. 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಬೇಕು.ನೇಮಕಾತಿಯ ನೆಪದಲ್ಲಿ ಇಂತಹ ವಿಲಕ್ಷಣ ರೀತಿಯ ಭ್ರಷ್ಟಾಚಾರಕ್ಕೆ ಇಳಿಯುತ್ತಿರುವುದು ಅಸಹ್ಯ ಹುಟ್ಟಿಸುತ್ತದೆ. ಈ ಬೆಳವಣಿಗೆಗಳು, ಮುಂದೆ ಈ ಪರೀಕ್ಷೆ ಬರೆಯುವ ಕನಸು ಹೊಂದಿರುವ ಅಭ್ಯರ್ಥಿಗಳಿಗೆ ಆಘಾತ ಉಂಟುಮಾಡುತ್ತವೆ. ಇದು ನಿಜಕ್ಕೂ ದುರ್ದೈವದ ಸಂಗತಿ.