ಮಹಾತ್ಮ ಗಾಂಧಿ ಈ ದೇಶದ ಮಹಾ ಚೇತನ. ಪ್ರತಿ ವರ್ಷವೂ ಅವರನ್ನು ಸ್ಮರಿಸಿಕೊಳ್ಳುವುದು ಕರ್ತವ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಗಾಂಧಿ ಹುಟ್ಟಿದ ದಿನಾಂಕದಂದೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರೂ ಹುಟ್ಟಿದರು. ಗಾಂಧೀಜಿಯ ಚಿಂತನೆಯ ಅನುಯಾಯಿಯಾಗಿ ಪ್ರಾಮಾಣಿಕ, ದೇಶಾಭಿಮಾನಿ, ಸ್ವಾಭಿಮಾನಿ, ದಕ್ಷ ಪ್ರಧಾನಿಯಾಗಿ ಹೆಸರು ಮಾಡಿದ್ದವರು ಶಾಸ್ತ್ರಿ ಅವರು. ಗಾಂಧೀಜಿಯ ಜೊತೆಜೊತೆಯಲ್ಲಿ ಶಾಸ್ತ್ರಿ ಅವರನ್ನೂ ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೇ?
ಆದರೆ ನಮ್ಮ ‘ಮೈತ್ರಿ ಸರ್ಕಾರ’ ಗಾಂಧಿ ಸ್ಮರಣೆಯ ಭರದಲ್ಲಿ ಶಾಸ್ತ್ರಿಯನ್ನು ಮರೆತೇಬಿಟ್ಟಿದೆ. ಇದು ಶೋಭೆ ತರುವಂಥದ್ದಲ್ಲ.