ಹಾಗಾಗಿ, ವಿಶೇಷ ಶಿಷ್ಯವೇತನಕ್ಕೆ ಅರ್ಹರಾಗಲು ಕೃಷಿ ಜಮೀನು ಹೊಂದಿರಬೇಕೆಂಬ ನಿಬಂಧನೆಯಿಂದ ಜಮೀನು ಹೊಂದಿರುವವರ ಮಕ್ಕಳಿಗೆ ಮಾತ್ರ ಅನುಕೂಲವಾಗುತ್ತದೆಯೇ ವಿನಾ ಜಮೀನು ಇಲ್ಲದ ಕೃಷಿಕರು ಹಾಗೂ ಕೃಷಿ ಕೂಲಿಕಾರ್ಮಿಕರ ಮಕ್ಕಳಿಗೆ ಪ್ರಯೋಜನವಾಗುವುದಿಲ್ಲ. ಕೋವಿಡ್ ಸಂಕಷ್ಟದ ಈ ಸಮಯದಲ್ಲಿ, ಅವರಿಗೆ ಸರ್ಕಾರದ ನೆರವಿನ ಅಗತ್ಯ ತುಂಬಾ ಇದೆ. ಅದರಿಂದ ಸರ್ಕಾರ ತನ್ನ ಆದೇಶದಲ್ಲಿ ಸೂಕ್ತ ಮಾರ್ಪಾಡು ಮಾಡುವ ಮೂಲಕ, ಜಮೀನು ಇಲ್ಲದ ಕೃಷಿಕರು ಮತ್ತು ಕೃಷಿ ಕೂಲಿಕಾರ್ಮಿಕರ ಮಕ್ಕಳಿಗೂ ವಿಶೇಷ ಶಿಷ್ಯವೇತನ ದೊರೆಯುವಂತೆ ಮಾಡಬೇಕು.