ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಒಟ್ಟಿಗೆ ಹಾರ ಹಾಕಿಸಿಕೊಂಡ ಆತ್ಮೀಯ ಭಂಗಿಯ ಚಿತ್ರ ನೋಡಿ ಅಚ್ಚರಿಯಾಯಿತು.
ಒಬ್ಬರನ್ನೊಬ್ಬರು ನಿಂದಿಸಿಕೊಂಡು, ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣದವರೆಗೂ ಹೋಗಿತ್ತು ಇವರ ರಗಳೆ. ಚಿತ್ರ ನೋಡಿದಾಕ್ಷಣ `ಅವರೇ ಇವರೇ' ಎಂದು ಒಂದು ಕ್ಷಣ ಯೋಚಿಸುವಂತಾಯಿತು!