ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಬೋಸ್ ಅವರು ತೋರಿದ್ದ ಹಾದಿಯಲ್ಲಿ ಭಾರತವು ಮುನ್ನಡೆದಿದ್ದರೆ ದೇಶ ಹೊಸ ಎತ್ತರಕ್ಕೆ ಏರುತ್ತಿತ್ತು’ ಎಂದಿದ್ದಾರೆ (ಪ್ರ.ವಾ., ಸೆ. 9). ಅಂದರೆ ಸೇನಾತ್ಮಕವಾದ ಹಿಂಸಾ ಮಾರ್ಗವನ್ನು ಅನುಸರಿಸದೆ ಗಾಂಧಿಯವರು ತೋರಿದ ಸತ್ಯ, ಅಹಿಂಸೆಯ ಮಾರ್ಗವನ್ನು ಹಾಗೂ ಸಮಾನತೆ, ಸ್ವಾತಂತ್ರ್ಯ, ಜಾತ್ಯತೀತ, ಪ್ರಜಾಪ್ರಭುತ್ವ ಮೌಲ್ಯಗಳ ಸಂವಿಧಾನವನ್ನು ಅನುಸರಿಸುತ್ತಿರುವುದರಿಂದ ಹಿನ್ನಡೆಯಾಗಿದೆ ಎಂದು ಭಾವಿಸಬೇಕೆ?