ದೇಶದ ಪ್ರತಿಯೊಬ್ಬ ಪ್ರಜೆಗೆ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವವನ್ನು ತಂದುಕೊಟ್ಟ ಸಂವಿಧಾನವೇ ನಮ್ಮ ಧರ್ಮ, ಅದೇ ನಮಗೆ ದೇವರು. ಅದಕ್ಕೆ ಗೌರವ ಕೊಡದಿದ್ದರೆ ಹೇಗೆ? ದೇವಾಲಯಕ್ಕೆ ಹೋಗುವುದರಿಂದ ಮನಸ್ಸು ಶುದ್ಧವಾಗುತ್ತದೆ, ಸಂತೋಷ, ನೆಮ್ಮದಿ ಸಿಗುತ್ತದೆ ಎಂಬುದು ನಂಬಿಕೆ. ಕೆಲವರ ಪ್ರವೇಶದಿಂದ ದೇವಾಲಯವೇ ಅಶುದ್ಧ, ಅಪವಿತ್ರವಾಗುತ್ತದೆ ಎನ್ನುವುದಾದರೆ ದೇವಾಲಯಗಳೇಕೆ ಬೇಕು?