ಕ್ಷಾತ್ರ ಸಂಪ್ರದಾಯದ ಪ್ರಕಾರ ಖಡ್ಗವು ಶೂರತ್ವದ ಸಂಕೇತ. ಕ್ಷತ್ರಿಯರಿಗೆ ಮದುವೆ ಮಾಡುವಾಗಲೂ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿರುತ್ತಾರೆ. ‘ಸಾಮ್ರಾಜ್ಯದ ರಕ್ಷಣೆ, ಶತ್ರು ಸಂಹಾರ, ಸಂಸ್ಕೃತಿಯ ಉಳಿವು ನಿನ್ನ ಪ್ರಥಮ ಆದ್ಯತೆ ಆಗಬೇಕು. ಹೆಂಡತಿ ಜೊತೆಗಿರುವಾಗಲೂ ಸುಖ ಲೋಲುಪತೆಯಲ್ಲಿ ರಾಜನಾದವ ಮೈ ಮರೆಯಬಾರದು’ ಎಂಬುದು ಆ ಸಂಪ್ರದಾಯದ ಹಿಂದಿರುವ ನೀತಿ. ಈ ರೀತಿಯ ವಸ್ತುನಿಷ್ಠ ವಿಶ್ಲೇಷಣೆ ಇದ್ದಾಗ ಕತ್ತಿ ಹಾಗೂ ಲೇಖನಿ ಸಮತೂಕ ಪಡೆಯುತ್ತವೆ. ಸಮೀಕರಣದ ಅಪಮೌಲ್ಯ ಆಗುವುದಿಲ್ಲ.
–ಆರ್.ವೆಂಕಟರಾಜು,ಬೆಂಗಳೂರು