‘ದೇಶದ ಅನೇಕ ನಗರಗಳಲ್ಲಿ ವಿಷಪೂರಿತ ಗಾಳಿಯ ಮಟ್ಟವು ಹೆಚ್ಚಾಗಿದ್ದು, ಶೀಘ್ರವೇ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಜನರ ಜೀವಿತಾವಧಿ ಮತ್ತು ಆರೋಗ್ಯದ ಮೇಲೆ ಭಾರಿ ದುಷ್ಪರಿಣಾಮವಾಗಲಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕಿ ಮಾರಿಯಾ ನೀರಾ ಹೇಳಿದ್ದಾರೆ. ಇತ್ತ ಕೇಂದ್ರ ಪರಿಸರ ಸಚಿವರು ‘ವಾಯುಮಾಲಿನ್ಯದಿಂದ ಜನರ ಜೀವಿತಾವಧಿ
ಯಲ್ಲಿ ಬದಲಾವಣೆ ಆಗುತ್ತದೆ ಎಂಬುದಕ್ಕೆ ಭಾರತದಲ್ಲಿ ಅಧ್ಯಯನಗಳು ನಡೆದಿಲ್ಲ’ ಎಂದಿದ್ದಾರೆ.