ವಯೋವೃದ್ಧರು, ನಿರ್ಗತಿಕರು, ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಸ್ಥರು,ಆಟೊ ಚಾಲಕರು, ವಿದ್ಯಾರ್ಥಿ
ಗಳಂಥವರ ಹಸಿವನ್ನು ಇಂದಿರಾ ಕ್ಯಾಂಟೀನ್ ನೀಗಿಸುತ್ತಿದೆ. ಇಂತಹ ಜನಪರ ಯೋಜನೆಯನ್ನು ರಾಜಕೀಯದ ಕಾರಣಕ್ಕೆ ನಿರ್ಲಕ್ಷಿಸುತ್ತಿರುವುದು ಎಷ್ಟು ಸರಿ? ಕಳಪೆ ಮಟ್ಟದ ಊಟ-ತಿಂಡಿ ನೀಡಿ, ಜನ ಬರುವುದಿಲ್ಲ ಎಂಬ ನೆಪವೊಡ್ಡಿ ಕ್ಯಾಂಟೀನ್ ಮುಚ್ಚುವ ಹುನ್ನಾರವೇ?