ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪದಾಧಿಕಾರಿಗಳಿಗೆ ನೀಡಿರುವ ‘ಹೊಣೆ ನಿರ್ವಹಿಸಿ, ಇಲ್ಲಾ ದಾರಿ ಬಿಡಿ’ ಎಂಬ ಕರೆ (ಪ್ರ.ವಾ., ಡಿ. 5), ಪಕ್ಷದಲ್ಲಿ ಇನ್ನೂ ಕಸುವು ಉಳಿದಿರಬಹುದು ಎಂಬುದಕ್ಕೆ ಸೂಚನೆ ನೀಡುವಂತಿದೆ! ದೇಶದ ಪ್ರಸಕ್ತ ರಾಜಕೀಯವು ಗತಿ ಮತ್ತು ಆಕೃತಿಗಳನ್ನು ಕಳೆದುಕೊಂಡಂತಿದೆ. ವ್ಯಕ್ತಿಗತ ಅಧಿಕಾರ
ಲಾಲಸೆಗೆ ಮಾತಿನ ಮೋಡಿಯ ಮುಸುಕುಹಾಕಿ ಅದನ್ನು ಮುನ್ನೂಕುವ ಚಾಲಾಕೇ ದೇಶವನ್ನಾಳುವ ಸಾಮರ್ಥ್ಯ ಎಂದು
ಆಲಸಿ ಮಹಾಜನತೆಯನ್ನು ನಂಬಿಸಲಾಗಿದೆ. ಹಾಗಾಗಿ ಮಹಾಜನತೆ ವೈಚಾರಿಕತೆಯನ್ನು ಬದಿಗೊತ್ತಿ ನಿದ್ದೆಗೆ ಜಾರಿದೆ.