<p>ಮಂಡ್ಯದ ಗಣಿ ವಿವಾದ ಮತ್ತು ಚಿತ್ರನಟ ದರ್ಶನ್ ಅವರಿಗೆ ಬ್ಲ್ಯಾಕ್ಮೇಲ್ ಪ್ರಕರಣಗಳೆರಡೂ ಸುದ್ದಿ ಮಾಧ್ಯಮಗಳಲ್ಲಿ ಕೆಲ ದಿನಗಳಿಂದ ವರ್ಣರಂಜಿತವಾಗಿ ಪ್ರಕಟವಾಗುತ್ತಿವೆ. ಮೇಲ್ನೋಟಕ್ಕೆ ಇವು ರಾಜ್ಯದ ಜನರ ದಿಕ್ಕು ತಪ್ಪಿಸುವಂತಹವು ಮತ್ತು ಕೆಲವೇ ದಿನಗಳಲ್ಲಿ ಜನಮಾನಸದಿಂದ ಮರೆಯಾಗುವಂತಹವು.</p>.<p>ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಕುರಿತು ಸಂಸದೆ ಸುಮಲತಾ ಅಂಬರೀಷ್ ನೀಡಿದ ಹೇಳಿಕೆಯು ಬರೀ ಮಂಡ್ಯದ ಜನರಿಗಷ್ಟೇ ಅಲ್ಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದಿಗಿಲು ತರುವಂತಹ ವಿಷಯ. ಹೀಗಿದ್ದಾಗ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಈ ಪ್ರಸ್ತಾಪದ ಧ್ವನಿಯನ್ನು ಬೆಂಬಲಿಸಬೇಕಿತ್ತೇ ವಿನಾ ಅಸಂಬದ್ಧ ಹೇಳಿಕೆಗಳನ್ನು ನೀಡುವುದಲ್ಲ.</p>.<p>ಇನ್ನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮನೆಗೆ ಬಂದ ದಿನವೇ ನಟ ದರ್ಶನ್ ಯಾಕೆ ಜಾಗರೂಕರಾಗಲಿಲ್ಲ? ತೋಟದ ಪರಿಶೀಲನೆಗೆಂದು ಬರುವ ತನಕವೂ ಕಾಯಬೇಕಿತ್ತೇ? ಗೊಂದಲದ ಈ ಎರಡೂ ಸುದ್ದಿಗಳ ಹಿಂದೇನೋ ಮಸಲತ್ತಿನ ಘಾಟು ಬಡಿಯುತ್ತಿರುವಂತಿದೆ.</p>.<p><em><strong>- ಗೋಪು ಗೋಖಲೆ,ಶಿಶಿಲ, ಬೆಳ್ತಂಗಡಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯದ ಗಣಿ ವಿವಾದ ಮತ್ತು ಚಿತ್ರನಟ ದರ್ಶನ್ ಅವರಿಗೆ ಬ್ಲ್ಯಾಕ್ಮೇಲ್ ಪ್ರಕರಣಗಳೆರಡೂ ಸುದ್ದಿ ಮಾಧ್ಯಮಗಳಲ್ಲಿ ಕೆಲ ದಿನಗಳಿಂದ ವರ್ಣರಂಜಿತವಾಗಿ ಪ್ರಕಟವಾಗುತ್ತಿವೆ. ಮೇಲ್ನೋಟಕ್ಕೆ ಇವು ರಾಜ್ಯದ ಜನರ ದಿಕ್ಕು ತಪ್ಪಿಸುವಂತಹವು ಮತ್ತು ಕೆಲವೇ ದಿನಗಳಲ್ಲಿ ಜನಮಾನಸದಿಂದ ಮರೆಯಾಗುವಂತಹವು.</p>.<p>ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಕುರಿತು ಸಂಸದೆ ಸುಮಲತಾ ಅಂಬರೀಷ್ ನೀಡಿದ ಹೇಳಿಕೆಯು ಬರೀ ಮಂಡ್ಯದ ಜನರಿಗಷ್ಟೇ ಅಲ್ಲ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದಿಗಿಲು ತರುವಂತಹ ವಿಷಯ. ಹೀಗಿದ್ದಾಗ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಈ ಪ್ರಸ್ತಾಪದ ಧ್ವನಿಯನ್ನು ಬೆಂಬಲಿಸಬೇಕಿತ್ತೇ ವಿನಾ ಅಸಂಬದ್ಧ ಹೇಳಿಕೆಗಳನ್ನು ನೀಡುವುದಲ್ಲ.</p>.<p>ಇನ್ನು ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಮನೆಗೆ ಬಂದ ದಿನವೇ ನಟ ದರ್ಶನ್ ಯಾಕೆ ಜಾಗರೂಕರಾಗಲಿಲ್ಲ? ತೋಟದ ಪರಿಶೀಲನೆಗೆಂದು ಬರುವ ತನಕವೂ ಕಾಯಬೇಕಿತ್ತೇ? ಗೊಂದಲದ ಈ ಎರಡೂ ಸುದ್ದಿಗಳ ಹಿಂದೇನೋ ಮಸಲತ್ತಿನ ಘಾಟು ಬಡಿಯುತ್ತಿರುವಂತಿದೆ.</p>.<p><em><strong>- ಗೋಪು ಗೋಖಲೆ,ಶಿಶಿಲ, ಬೆಳ್ತಂಗಡಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>