ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಾವು ಪ್ರತಿನಿಧಿಸುವ ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟಿ ತಾಲ್ಲೂಕುಗಳ ಪಟ್ಟಿಗೆ ಸೇರಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ಬೆಂಗಳೂರಿನ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿ ಕಣ್ಣೀರು ಹಾಕಿದ್ದು (ಪ್ರ.ವಾ., ಆ. 13) ವಿಪರ್ಯಾಸ. ಸಚಿವ ಸ್ಥಾನ ಬೇಕು, ಇಂತಹುದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವ ಶಾಸಕರ ಮಧ್ಯೆ, ಕ್ಷೇತ್ರದ ಹಿತಕ್ಕಾಗಿ ಧರಣಿ ಮಾಡುವ, ಕಣ್ಣೀರು ಹಾಕುವ ಇಂತಹ ಶಾಸಕರು ವಿಭಿನ್ನವಾಗಿ
ನಿಲ್ಲುತ್ತಾರೆ.