ಪ್ರಕಾಶ ಖೇಡ ಎಂಬುವರು ತಮ್ಮ ಶಕ್ತಿ, ಸಾಮರ್ಥ್ಯ, ಸಾಧನೆ ಮತ್ತು ಸಂಸ್ಕಾರದಿಂದ ಹಳ್ಳಿಯ ಜನರ ಮನಸ್ಸನ್ನು ಗೆದ್ದು, ಹಳ್ಳಿಯಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಪ್ರೇರಣೆಯಾದದ್ದು, ಗುಡಿಯ ಜೀರ್ಣೋದ್ಧಾರಕ್ಕೆ ಹಣ ನೀಡಿ, ಅದರ ಪ್ರವೇಶಕ್ಕೆ ಎಲ್ಲರಿಗೂ ಮುಕ್ತ ಅವಕಾಶ ನೀಡುವಂತೆ ಹಳ್ಳಿಗರನ್ನು ಕೋರಿದ್ದು, ಜನ ಅವರ ಮಾತಿನಂತೆ ದೇವಸ್ಥಾನಕ್ಕೆ ಮುಕ್ತ ಅವಕಾಶ ನೀಡಿದ್ದು ನಿಜಕ್ಕೂ ಒಂದು ಸಾಮಾಜಿಕ ಕ್ರಾಂತಿ. ಅಂಬೇಡ್ಕರ್, ಗಾಂಧಿಯವರ ಕನಸು ಕೂಡ ಇದೇ ಆಗಿತ್ತು. ನಾಗರಿಕ ಸೌಲಭ್ಯಗಳು ಸಾಮಾನ್ಯರಿಗೆ ಸಿಗುವಷ್ಟು ಸುಲಭವಾಗಿ ದಲಿತ ಜನಾಂಗಕ್ಕೂ ಸಿಗಬೇಕು ಎಂಬುದಾಗಿತ್ತು. ಅವರ ಕನಸನ್ನು ಈಡೇರಿಸುವ ದಿಸೆಯಲ್ಲಿ ಪ್ರಕಾಶ ಖೇಡ ಅವರ ಪ್ರಯತ್ನ ಶ್ಲಾಘನೀಯ.