ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ, ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ, ರಾಹುಲ್ ಗಾಂಧಿ ಕೇರಳದ ವಯನಾಡಿನಲ್ಲಿ, ದೇವೇಗೌಡರು ತುಮಕೂರಿನಲ್ಲಿ, ಎಸ್.ಎಂ.ಕೃಷ್ಣ ಚಾಮರಾಜಪೇಟೆಯಲ್ಲಿ, ಅನಂತನಾಗ್ ಬಸವನಗುಡಿಯಲ್ಲಿ ಸ್ಪರ್ಧಿಸಿದ್ದು ಗಮನಾರ್ಹ. ಈ ಪಟ್ಟಿ ಬಹಳಷ್ಟು ದೊಡ್ಡದಿದೆ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯಾದರೂ ಸೋಲಿನ ಭೀತಿಯೇ ಅತಿಮುಖ್ಯ ಕಾರಣ. ಇಂತಹದ್ದರ ಜೊತೆಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ದಿಸುವವರೂ ಇದ್ದಾರೆ.