ಗಾಯದ ಮೇಲೆ ಬರೆ ಎಳೆದಂತೆ ಹವಾಮಾನ ವೈಪರೀತ್ಯದಿಂದಾಗಿ ಮುಂಗಾರಿನ ಆಗಮನ ಮತ್ತು ನಿರ್ಗಮನವು ಏರುಪೇರಾಗಿ ರೈತನನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ. ಸರ್ಕಾರವು ಕಾರ್ಯಪ್ರವೃತ್ತವಾಗಿ, ತುರ್ತಾಗಿ ರಸಗೊಬ್ಬರ ಪೂರೈಸಬೇಕು. ಇಲ್ಲದಿದ್ದರೆ ಪ್ರತಿಕೂಲ ಪರಿಣಾಮ ಉಂಟಾಗಿ, ಸೂಕ್ತ ಸಮಯದಲ್ಲಿ ಬೆಳೆ ಬಾರದೆ ಹಣದುಬ್ಬರ ಹೆಚ್ಚಾಗಿ ರೈತ, ಗ್ರಾಹಕ ಮತ್ತು ದೇಶದ ಆರ್ಥಿಕತೆಯು ಮತ್ತಷ್ಟು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ರೈತರ ಹಿತ ಸಮಸ್ತ ನಾಡಿನ ಹಿತ ಎನ್ನುವುದನ್ನು ಸರ್ಕಾರ ಮರೆಯಬಾರದು.