‘ಮನಸು ಬೆಸೆವ ಆಟಗಳೂ ವ್ಯಾಪಾರವಾಗಿಬಿಟ್ಟರೆ...’ (ಪ್ರ.ವಾ., ಜುಲೈ 22) ಲೇಖನದಲ್ಲಿ ಪ್ರಕಾಶ್ ರೈ ಅವರು, ‘ದೇಶದ ಹೆಚ್ಚು ಕಡಿಮೆ ಎಲ್ಲಾ ಕ್ರೀಡೆಗಳನ್ನು ತಿಂದು ಕುಡಿದಿರುವ ಕ್ರಿಕೆಟ್, ಒಂದು ಬಗೆಯಲ್ಲಿ ವ್ಯಾಪಾರವಾಗಿದ್ದು, ಇದರಿಂದ ಅನೇಕ ಆಭಾಸ ಹಾಗೂ ಆಪತ್ತುಗಳು ಸಂಭವಿಸುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲೇಖನದ ಅಂತ್ಯದಲ್ಲಿ, ‘ಶಾಲೆ, ವಿದ್ಯಾ ಕೇಂದ್ರಗಳು, ಆಸ್ಪತ್ರೆಗಳು, ಚಿಕಿತ್ಸೆ, ಧರ್ಮ ಹಾಗೂ ದೈವನಂಬಿಕೆ ವ್ಯಾಪಾರವಾಗಿ ಬಿಟ್ಟಿರುವ ಇಲ್ಲಿ ಇನ್ನೂ ಬಹಳ ಪಾಠಗಳನ್ನು ಕಲಿಯಬೇಕಾಗುತ್ತದೆ’ ಎಂಬ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ, ಅದು ಸಮಂಜಸ.