ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ರೈಲಿನಲ್ಲಿ ಪ್ರಯಾಣಿಸಿದ್ದರಲ್ಲಿ (ಪ್ರ.ವಾ., ಜೂನ್ 27) ವಿಶೇಷವೇನೂ ಇಲ್ಲ. ರಾಷ್ಟ್ರಪತಿ ರೈಲಿನಲ್ಲಿ ಪಯಣಿಸುವ ಸಲುವಾಗಿ ವಿಲಾಸಿ ಬೋಗಿ, ಅದನ್ನು ಹತ್ತಲು ವಿಶೇಷ ಮೆಟ್ಟಿಲು ಮತ್ತು ಕಂಬಿಗಳು, ಅದಕ್ಕೆಂದೇ ಕೆಲವೇ ನಿಲುಗಡೆಗಳು... ಅಬ್ಬಾ ಒಂದೇ ಎರಡೇ. ಆದರೆ ಇವರು ರೈಲು ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಭದ್ರತೆಗೆಂದು ವಾಹನ ಸಂಚಾರವನ್ನು ತಡೆಹಿಡಿದಾಗ, ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸಾವನ್ನಪ್ಪಿರುವುದು ದುರದೃಷ್ಟಕರ.