ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗೆ ಇಷ್ಟು ಭಾರಿ ಮೊತ್ತ ಬೇಕೇ?

Last Updated 10 ಸೆಪ್ಟೆಂಬರ್ 2020, 17:28 IST
ಅಕ್ಷರ ಗಾತ್ರ

ಹಿರಿಯ ವಿಮರ್ಶಕ ಜಿ.ಎಸ್‌.ಆಮೂರ ಅವರು 2020ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ಆಮೂರ ಅವರು ಕನ್ನಡಕ್ಕೆ ನೀಡಿರುವ ಮೌಲಿಕ ಕೊಡುಗೆ ಪ್ರಖರ, ವಿಶಿಷ್ಟ. ಆದರೆ ಇಲ್ಲೊಂದು ಸೂಕ್ಷ್ಮವನ್ನು ಗಮನಿಸಲೇಬೇಕಿದೆ. ಹಿಂದೆಂದೂ ಕಂಡು ಕೇಳರಿಯದಂಥ ಕೋವಿಡ್ -19, ಎಲ್ಲ ಮಗ್ಗುಲು ಗಳಲ್ಲೂ ತೀವ್ರ ಆರ್ಥಿಕ ಸಂಕಷ್ಟವೊಡ್ಡಿ ಬದುಕನ್ನು ಸೊರಗಿಸಿದೆ. ಹೀಗಿರುವಾಗ, ಈ ಪ್ರಶಸ್ತಿಗೆ ₹ 7 ಲಕ್ಷದಷ್ಟು ದೊಡ್ಡ ಮೊತ್ತ ಅಗತ್ಯವೇ? ಇದನ್ನು ಪರಿಷ್ಕರಿಸಬಹುದಲ್ಲವೇ? ಮೊತ್ತ ಕಡಿಮೆಯಾಗಿಸಿದರೆ ಪ್ರಶಸ್ತಿಯ ಮೌಲ್ಯವೇನೂ ಕಡಿಮೆಯಾಗದು. ಪ್ರಶಸ್ತಿಯ ಮೊತ್ತವೇ ಪ್ರತಿಷ್ಠೆಯಾಗಬಾರದು.

–ಬಿಂಡಿಗನವಿಲೆ ಭಗವಾನ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT