ಪಿಎಸ್ಐ ನೇಮಕಾತಿ ಅಕ್ರಮ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ಎಡಿಜಿಪಿ ಅಮ್ರಿತ್ ಪೌಲ್ ಹಾಗೂ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರನ್ನು ಬಂಧಿಸಿರುವ ಸುದ್ದಿ ಓದಿ (ಪ್ರ.ವಾ., ಜುಲೈ 5) ವ್ಯವಸ್ಥೆಯ ಬಗೆಗೆ ಬಹಳ ಬೇಸರವಾಯಿತು. ಅಪಾರ ಅಧಿಕಾರ ಮತ್ತು ಸವಲತ್ತುಗಳೊಂದಿಗೆ ಕೈತುಂಬ ಸಂಬಳ ಸಿಗುತ್ತಿದ್ದರೂ ಇಂತಹ ಪ್ರಭಾವಿ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡುವುದು ನಾಚಿಕೆಗೇಡಿನ ಸಂಗತಿ. ಇವರ ಬಂಧನವು ಉಳಿದವರಿಗೆ ಗಟ್ಟಿ ಸಂದೇಶ ರವಾನಿಸಲಿ.