ಪ್ರಧಾನಿ ನರೇಂದ್ರ ಮೋದಿಯವರೇ ಈ ನಿಧಿಯ ಪದನಿಮಿತ್ತ ಅಧ್ಯಕ್ಷರಾಗಿದ್ದು, ಪ್ರಧಾನಿ ಕಾರ್ಯಾಲಯವೇ ನಿಧಿಯನ್ನು ನಿರ್ವಹಣೆ ಮಾಡುವಾಗ ಪಾರದರ್ಶಕತೆ ಕಾಪಾಡಲೇಬೇಕು. ವಿರೋಧಿಗಳು ಲೆಕ್ಕ ಕೇಳುತ್ತಾರೆ, ಅವರಿಗೇನು ಲೆಕ್ಕ ಕೊಡುವುದು ಎಂಬ ಧೋರಣೆ ಸಲ್ಲ. ಸದುದ್ದೇಶದಿಂದ ಕೊಟ್ಟ ದೇಣಿಗೆಯು ದುರ್ಬಳಕೆ ಆಗಿರಬಹುದೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಲು ಎಡೆ ಮಾಡಿಕೊಡುವುದು ಒಳ್ಳೆಯ ಲಕ್ಷಣ ಅಲ್ಲ.