ದಲಿತನೊಬ್ಬ ಮಂತ್ರಿಗಿರಿಗೇರಿದರೂ ಅಸ್ಪೃಶ್ಯನಾಗೇ ಉಳಿದುಕೊಳ್ಳುತ್ತಾನೆ. ಈ ಸತ್ಯ ತಿಳಿದು ದಲಿತ ಜನಪ್ರತಿನಿಧಿಯು ಪ್ರಬಲ ಜಾತಿಯವರ ಮನೆಯ ಒಳಗೆ ಹೋಗುವುದಿಲ್ಲ. ಬದಲಾಗಿ, ‘ಇಲ್ಲೇ ಗಾಳಿ ಚೆನ್ನಾಗದೆ’ ಎಂದು ಜಗುಲಿಯಲ್ಲಿ ಕುಳಿತುಕೊಳ್ಳುತ್ತಾನೆ. ಹಾಗೊಮ್ಮೆ ಒಳಹೋದರೆ, ಅವ ಅಹಂಕಾರಿ ಎಂದು ಬಿಂಬಿತ ನಾಗುತ್ತಾನೆ. ತಮಿಳುನಾಡಿನ ಒಬ್ಬ ಬಾಲಕನಿಗೆ ಮಿಠಾಯಿ ನೀಡಲು ಅಂಗಡಿಯಾತ ನಿರಾಕರಿಸುವುದು ನಮ್ಮ ಮನಕಲಕುವುದಾದರೆ, ನಮ್ಮ ಜನಪ್ರತಿನಿಧಿಗಳನ್ನು ಜಾತಿಯ ಕಾರಣಕ್ಕೆ ನಾವು ಅವಮಾನಿಸುವ ರೀತಿಗೆ ತಲೆತಗ್ಗಿಸಿದರಷ್ಟೇ ಸಾಕೆ?