ವಿಪರ್ಯಾಸವೆಂದರೆ, ಕೃತಿಯ ಪ್ರತಿಗಳು ಈಗ ಪುಸ್ತಕದ ಅಂಗಡಿಗಳಲ್ಲಿ ಸಿಗುತ್ತಿಲ್ಲ. ಎರಡು– ಮೂರು ವರ್ಷಗಳಿಂದ ಈ ಕೃತಿಗಾಗಿ ಬೆಂಗಳೂರಿನ ಎಲ್ಲ ಪುಸ್ತಕದ ಅಂಗಡಿಗಳಲ್ಲಿ ಹಾಗೂ ಸಾಹಿತ್ಯ ಪರಿಷತ್ನಲ್ಲಿ ವಿಚಾರಿಸಿದ್ದೇನೆ. ‘ಖಾಲಿಯಾಗಿದೆ, ಮರು ಮುದ್ರಣಗೊಂಡಿಲ್ಲ’ ಎಂಬ ಉತ್ತರವೇ ದೊರೆಯುತ್ತಿದೆ. ಇದನ್ನು ಕೇಳಿ ನಿಜಕ್ಕೂ ಬೇಸರ ಆಗುತ್ತಿದೆ. ಇದು ಒಂದು ಕೃತಿಯ ಕಥೆ. ಇಂತಹ ಅನೇಕ ಮಹತ್ವದ ಕೃತಿಗಳ ಸ್ಥಿತಿ ಹೇಗಿರಬಹುದು? ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕೃತಿಗಳು ಎಲ್ಲ ಕಾಲಕ್ಕೂ ಎಲ್ಲರಿಗೂ ಸಿಗಬೇಕಲ್ಲವೇ? ಈ ಬಗ್ಗೆ ಅನಾದರವೇಕೆ ಎಂಬುದು ಅರ್ಥವಾಗುತ್ತಿಲ್ಲ. ಇದು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆಯಲ್ಲವೇ? ಈ ಬಗ್ಗೆ ಇನ್ನಾದರೂ ಯೋಚಿಸಲಿ.