ಪ್ರತಿನಿತ್ಯ ತಂಡೋಪತಂಡವಾಗಿ ಜೇನು ಸಂಗ್ರಹಣೆಗೆ ಹೊರಡುವ ಜೇನ್ನೊಣಗಳು ಮಕರಂದದೊಂದಿಗೆ ಹಿಂದಿರುಗುವ ಬದಲು, ಅದರಲ್ಲಿರುವ ವಿಷಕಾರಿ ಕ್ರಿಮಿನಾಶಕ ಸೇವಿಸಿ ಸಾವನ್ನುಪ್ಪುತ್ತಿವೆ. ವಾಣಿಜ್ಯ ಬೆಳೆಗಳು, ಸಾಮಾನ್ಯ ಬೆಳೆಗಳೆನ್ನದೆ ಎಲ್ಲಾ ಬೆಳೆಗಳನ್ನು ಇಂದು ಕ್ರಿಮಿನಾಶಕದಿಂದಲೇ ಬೆಳೆಯಲಾಗುತ್ತಿದೆ. ಹೀಗಾಗಿ ಜೇನುಕುಟುಂಬಗಳು ನಶಿಸುತ್ತಿವೆ.