‘ಅರ್ಚಕ ವೃತ್ತಿಯನ್ನೂ ಬ್ರಾಹ್ಮಣರಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ’ ಎಂದು ಪೇಜಾವರ ಮಠದ
ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮಾರ್ಚ್ 1). ಅವರ ಈ ಬೇಸರಕ್ಕೆ ಅರ್ಥವೇ ಇಲ್ಲ. ಏಕೆಂದರೆ ಇಂದು ಇಂಥ ವೃತ್ತಿ ಇಂಥದ್ದೇ ಜಾತಿಯವರಿಗೆ ಮೀಸಲು ಎಂಬುದಾಗಿ ಉಳಿದಿಲ್ಲ. ಸರ್ಕಾರದ ಆಡಳಿತದಲ್ಲಿರುವ ಮುಜರಾಯಿ ದೇವಸ್ಥಾನಗಳೇ ಅಲ್ಲದೆ ಅನೇಕ ಖಾಸಗಿ ದೇವಸ್ಥಾನಗಳಲ್ಲೂ ಬ್ರಾಹ್ಮಣೇತರರು ಅರ್ಚಕ ವೃತ್ತಿಗೆ ಬೇಕಾದ ವೈದಿಕ ವಿದ್ಯೆಯನ್ನು ಕಲಿತು ಅರ್ಚಕರಾಗಿ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.