ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವಿಲ್ಲದ ಹೇಳಿಕೆ ಪರಿಣಾಮ ಬೀರದು

Last Updated 27 ನವೆಂಬರ್ 2019, 19:56 IST
ಅಕ್ಷರ ಗಾತ್ರ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಪೆದ್ದ ಎಂದು ಕರೆದು ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ, ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಒತ್ತಾಯಿಸಿ
ದ್ದಾರೆ! ಅಲ್ಲಾ ಸ್ವಾಮಿ, ರಾಜಕೀಯ ವ್ಯಕ್ತಿಗಳಾದ ನೀವು ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುವುದು ಸಾಮಾನ್ಯ
ವಾಗಿಬಿಟ್ಟಿದೆ. ಯಾವುದೇ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ನಿಂದಿಸಿದರೆ ಅದು ಹೇಗೆ ಇಡೀ ಒಂದು ಸಮುದಾಯವನ್ನು ಅಪಮಾನಿಸಿದಂತೆ ಆಗುತ್ತದೆ?

ಊರುಗಳಲ್ಲಿ ಅಣ್ಣ-ತಮ್ಮಂದಿರ ರೀತಿ ಇರುವ ಎಲ್ಲಾ ಜಾತಿಯ ಸಾಮಾನ್ಯ ಜನರಲ್ಲಿ ಯಾಕೆ ನೀವು ಜಾತಿಯ ವಿಷಬೀಜ ಬಿತ್ತಿ ಜಾತೀಯತೆಯನ್ನು ಪೋಷಿಸುತ್ತಿದ್ದೀರಿ? ಜನ ಈಗ ಪ್ರಜ್ಞಾವಂತರಾಗಿದ್ದಾರೆ. ನಿಮ್ಮ ಈ ಅರ್ಥವಿಲ್ಲದ ಹೇಳಿಕೆಗಳು ನಿಮ್ಮ ವರ್ಚಸ್ಸನ್ನು ಕುಂದಿಸಬಹುದೇ ಹೊರತು ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಮೊದಲು ಅರಿತುಕೊಳ್ಳಿ.

ರಾಜು ಬಿ. ಲಕ್ಕಂಪುರ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT