ಮಡಿಕೇರಿ, ಹಂಪಿ ಮೊದಲಾದ ಪ್ರವಾಸಿ ತಾಣಗಳ ವಿಹಾರಕ್ಕೆ ನಿರ್ಬಂಧವಿಲ್ಲದ್ದರಿಂದ ಪ್ರವಾಸಿಗರು ಹಿಂಡುಹಿಂಡಾಗಿ ಜಮಾಯಿಸುತ್ತಿದ್ದಾರೆ. ಇಲ್ಲೆಲ್ಲ ಮಾಸ್ಕ್ ಧರಿಸದೆ, ಪರಸ್ಪರ ಹೆಗಲ ಮೇಲೆ ಕೈಹಾಕಿಕೊಂಡು ನಡೆದಾಡುತ್ತಿದ್ದಾರೆ. ಕೊರೊನಾದ ನಿಯಮಗಳನ್ನು ಮರೆತು ಪ್ರವಾಸಿಗರು ವಿಹರಿಸುತ್ತಿರುವುದನ್ನು ಗಮನಿಸಿದರೆ, ಕರ್ನಾಟಕ ಕೊರೊನಾಮುಕ್ತವಾಗಿದೆಯೇನೋ ಎಂಬಂತೆ ಭಾಸವಾಗುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಜೀವನಕ್ಕೆ ಬೆಲೆ ಕೊಡುವ ಆತುರದಲ್ಲಿ ಜೀವ ರಕ್ಷಣೆ ಮರೆಯುವುದು ಬೇಡ. ಎಲ್ಲೆಲ್ಲಿ ನಿರ್ಬಂಧ ಸಡಿಲಿಕೆಯು ಕೊರೊನಾ ವ್ಯಾಪಿಸಲು ಕಾರಣವಾಗುತ್ತಿದೆ ಎನಿಸುವುದೋ ಅಲ್ಲೆಲ್ಲ ನಿರ್ಬಂಧ ಹೇರುವುದು ಉಚಿತ.