ಕೊರೊನಾ ಸೋಂಕಿನಿಂದ ಕಂಟೈನ್ಮೆಂಟ್ ವಲಯಕ್ಕೆ ಒಳಪಟ್ಟಿರುವ ಗ್ರಾಮಗಳಲ್ಲಿ ರೈತರಿಂದ ಹಾಲು ಖರೀದಿ ನಡೆಯುತ್ತಿಲ್ಲ. ಹೀಗಾಗಿ ಈ ರೈತರು ಹಾಲನ್ನು ಭೂಮಿಗೆ ಸುರಿಯುತ್ತಿದ್ದಾರೆ. ನಗರವಾಸಿಗಳು ಕಾರ್ಖಾನೆ ಹಾಗೂ ಇನ್ನಿತರ ಕೆಲಸಗಳನ್ನು ಬಿಟ್ಟು ಹೈನೋದ್ಯಮಕ್ಕೆ ಇಳಿಯುತ್ತಿರುವುದರಿಂದ ಪ್ರಸ್ತುತ ರೈತರಿಗೆ ನೀಡುವ ಹಾಲಿನ ಮೇಲಿನ ದರ ಇಳಿಕೆಯಾಗಿದೆ. ಹೈನೋದ್ಯಮವನ್ನೇ ನಂಬಿಕೊಂಡಿರುವ ಗ್ರಾಮೀಣ ಪ್ರದೇಶದ ಹಲವಾರು ಕೃಷಿಕ ಕುಟುಂಬಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಹಾಲಿನ ದರ ಕಡಿಮೆಯಾಗಿರುವುದರಿಂದ ಹಸುಗಳ ಪಾಲನೆಯೇ ಕಷ್ಟವಾಗತೊಡಗಿದೆ. ಇನ್ನು ಇದನ್ನು ನಂಬಿರುವ ರೈತರ ಗತಿಯೇನು? ಈ ಬಗ್ಗೆ ಸರ್ಕಾರ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು.