ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂರಹಿತ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಜಮೀನು ನೀಡುವ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದನ್ನು ತಿಳಿದು (ಪ್ರ.ವಾ., ಒಳನೋಟ, ಡಿ. 20) ಮನಸ್ಸಿಗೆ ನೋವಾಯಿತು. ಚೋಮನಂತಹವರು ಸ್ವಾತಂತ್ರ್ಯಾನಂತರ ಆಶ್ವಾಸನೆಗಳನ್ನು ನಂಬುತ್ತಾ ಬರೀ ಕನಸು ಕಾಣುತ್ತಾ ಕೈ ಕಟ್ಟಿ ಜಡವಾಗಿ ಕುಳಿತಿದ್ದಾರೆ. ಯಾವ ಸವಲತ್ತುಗಳೂ ಅವರ ಗುಡಿಸಿಲಿನೊಳಗೆ ಅಡಿಯಿಟ್ಟಿಲ್ಲ. ಎಲ್ಲವೂ ಉಳ್ಳವರು ಹಾಗೂ ಓಲೈಸುವವರ ಪಾಲು.