‘ನಮ್ಮ ನಾಯಕಿಯರು ಪಕ್ಷಭೇದ ಮೀರಿ ದನಿಯೆತ್ತಿದರೆ ಮಾತ್ರ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಬಹುದು’ ಎಂದು ನಟರಾಜ್ ಹುಳಿಯಾರ್ ಅವರು ಹೇಳಿರುವುದು (ಪ್ರ.ವಾ., ಸೆ. 17) ಸತ್ಯವಾದ ಮಾತು. ಇದುವರೆಗೂ ಯಾವ ರಾಜಕಾರಣಿಗೂ ಇದರ ಬಗ್ಗೆ ದನಿ ಎತ್ತಬೇಕು ಎಂದು ಅನಿಸದಿರುವುದು ಸಹಜವೆ. ಏಕೆಂದರೆ, ನಮ್ಮದು ಪುರುಷ ಪ್ರಧಾನ ಸಮಾಜವಲ್ಲವೇ? ಇಲ್ಲಿ ಯಾವತ್ತೂ ಪುರುಷ ರಾಜಕಾರಣಿಗಳ ಸ್ವಾರ್ಥ, ಹುನ್ನಾರಗಳೇ ಮೇಲುಗೈ ಸಾಧಿಸುವುದು. ಅಧಿಕಾರದ ದಾಹ, ದುರಾಸೆ, ಸ್ತ್ರೀವಿರೋಧಿ ಧೋರಣೆಗಳು ಎಲ್ಲವೂ ಮಸೂದೆಯು ಕಡತಗಳಲ್ಲಿ ಕೊಳೆಯುವಂತೆ ಮಾಡಿವೆ.